Lecture 51 ಕನ್ನಡ ಮಾಧ್ಯಮ ಪ್ಲಾಸಿಕದನ ಕಾರಣಗಳು


 ಪ್ಲಾಸಿ ಕದನಕ್ಕೆ ಕಾರಣಗಳು

ಪ್ರಶ್ನೆ1.   ರಾಜಕೀಯ ಕಾರಣ ಬಗ್ಗೆ ತಿಳಿಸಿ

ಉತ್ಸಾಹಿ ಸ್ವಾತಂತ್ರ್ಯ ಪ್ರೇಮಿಯಾದ ಸಿರಾಜ್‌ - ಉದ್‌ - ದೌಲ್‌ ನಿಗೆ ದೊಡ್ಡಮ್ಮನಾದ ಢಾಕಾದ ಗಸ್ತಿ ಬೇಗಂ ಇನ್ನೋವ೯   ದೊಡ್ಡಮ್ಮನ ಮಗ ಪೂನಿ೯ಯಾದ  ಸುಭೇದಾರ್‌ ಶೌಕತ್ ಜಂಗ್‌ ವಿರೋಧಿಗಳಾಗಿದ್ದರು. ಅಲ್ಲದೇ ಅವರಿಗೆ ಉಚ್ಛಾಟಿತ ದಿವಾನ್‌ ರಾಜವಲ್ಲಭನ ಬೆಂಬಲವೂ ಇತ್ತು. ಸಿರಾಜ್‌ - ಉದ್‌ - ದೌಲ್ನ ವೈರಿಯಾದ ಶೌಕತ್‌ ಜಂಗ್‌ ನನ್ನು ಅಧಿಕಾರಕ್ಕೆ ತರಲು ಬ್ರಿಟಿಷರು ಹವಣಿಸುತ್ತದ್ದರು. ಅಲ್ಲದೇ ರಾಜದ್ರೋಹಿಗಲಅದ ಇವರೆಲ್ಲರಿಗೂ ಬ್ರಿಟಿಷರು ಆಶ್ರಯ ನೀಡಿದ್ದರು.

ಪ್ರಶ್ನೆ 2. ನವಾಬನ ಅಧಿಕಾರ ಒಪ್ಪದೆ ಇರುವುದು

ಕ್ರಿ.ಶ 1756 ರಲ್ಲಿ ಯುರೋಪಿನಲ್ಲಿ ಆರಂಭವಾದ ಸಪ್ತ ವಾಷಿ೯ಕ ಯುದ್ದದಿಂದ ಫ್ರೆಂಚರ್‌ ಭೀತಿಯಿಂದ ಬ್ರಿಟಿಷರು ಕಲ್ಕತ್ತಾ ಕೋಟೆಯನ್ನು ಭದ್ರಪಡಿಸಿದರು. ಇದರಿಂದ
ನವಾಬ ಕೆರಳಿದನು.


ಪ್ರಶ್ನೆ 3.   ಆಥಿ೯ಕ ಕಾರಣ ಬಗ್ಗೆ ತಿಳಿಸಿ


ಕ್ರಿ.ಶ 1717 ರಲ್ಲಿ ಮೊಗಲ್‌ ದೊರೆ ಫರುಕಸಿಯಾರ್ನು ಬ್ರಿಟಿಷರಿಗೆ ಬಂಗಾಳದಲ್ಲಿ ಸುಂಕ ರಹಿತ ವ್ಯಾಪಾರ ಮಾಡಲು ಅನುಮರತಿ ನೀಡಿದ್ದನು.
ಇದರಿಂದಾಗಿ ಬ್ರಿಟಿಷರಿಗೆ ದಸ್ತಕಗಳು ದೊರೆತ್ತಿದ್ದವು. (ದಸ್ತಕಗಲೇಮದರೆ ದುರಪಯೋಗವಾಗಿ ಬಂಗಾಳಕ್ಕೆ ಅಪಾರ ನಷ್ಟವಾಗುತಿತ್ತು
 ಅವ್ಯವಹಾರದಲ್ಲಿ ತೊಡಗಿದವರಿಗೆ ನವಾಬ್‌ ಶಿಕ್ಷಿಸಲು ಮುಂದಾದಾಗ ಅವರಿಗೆ ಬ್ರಿಟಿಷರು ಆಶ್ರಯ ನೀಡಿದರು ಇದರಿಂದ ನವಾಬ ಕೋಪಗೊಳ್ಳುವಂತಾಯಿತು.


ಪ್ರಶ್ನೆ 4.   ಕಲ್ಕತ್ತಾ ಸುತ್ತ ಕೋಟೆಯನ್ನು ಭದ್ರಪಡಿಸಿದ್ದು ಅವುಗಳು

ಕ್ರಿ.ಶ 1756 ರಲ್ಲಿ ಯುರೋಪಿನಲ್ಲಿ ಆರಂಭವಾದ ಸಪ್ತ ವಾಷಿ೯ಕ ಯುದ್ದದಿಂದ ಫ್ರೆಂಚರ್‌ ಭೀತಿಯಿಂದ ಬ್ರಿಟಿಷರು ಕಲ್ಕತ್ತಾ ಕೋಟೆಯನ್ನು ಭದ್ರಪಡಿಸಿದರು. ಇದರಿಂದ
ನವಾಬ ಕೆರಳಿದನು.


ಪ್ರಶ್ನೆ 5.   ಫ್ರೆಂಚರಿಗೆ ಆಶ್ರಯ ಯಾವುವು

ಕ್ರಿ.ಶ 1757 ರಲ್ಲಿ ಬ್ರಿಟಿಷರು ಫ್ರೆಂಚರು ನೆಲೆಯಾದ ಚಂದ್ರಾನಾಗೋರನ್ನು ಆಕ್ರಮಿಸಿ ವಶಪಡಿಸಿಕೊಂಡರು. 
ಆಗ ನಿರಾಶ್ರಿತರಾದ ಫ್ರೆಂಚರಿಗೆ ಸಿರಾಜ್‌ - ಉದ್-ದೌಲ್‌ ಆಶ್ರಯ ನೀಡಿದನು. ಇದು ಬ್ರಿಟಿಷರ ಕೋಪಕ್ಕೆ ಕಾರಣವಾಯಿತು.


ಪ್ರಶ್ನೆ 6.  ಕಪ್ಪು ಕೊಣೆಯ ದುರಂತ ಬಗ್ಗೆ ತಿಳಿಸಿ

ಕಲ್ಕತ್ತಾದಲ್ಲಿ ನವಾಬನ ವೈರಿಯಾದ ರಾಜವಲ್ಲಭನ ಪರಿವಾರಕ್ಕೆ ಬ್ರಿಟಿಷರು ಆಶ್ರಯ ನೀಡಿದ್ದರು. ರಾಜವಲ್ಲಭನನ್ನು ತನಗೆ ಒಪ್ಪಿಸುವಂತೆ ಬ್ರಿಟಿಷರಿಗೆ ಆದೇಶ ನೀಡಿದಾಗ ಬ್ರಿಟಿಷರು ತಿರಸ್ಕರಿಸಿದರು. ಇದರಿಂದ ಕೋಪಗೊಂಡ ಸಿರಾಜ್‌ - ಉದ್‌ -ದೌಲ್‌ 1756 ಜೂನ್‌ 16 ರಂದು ಕಾಸಿಂಬಜಾರ್ನ್ನು ಆಕ್ರಮಿಸಿ ವಶಪಡಿಸಿಕೊಂಡನು.

ಈ ಆಕ್ರಮಣದಲ್ಲಿ ಸೆರೆ ಸಿಕ್ಕ146 ಜನ ಸೈನಿಕರನ್ನು ಜೂನ್‌ 20 ರಂದು 18 X 14.10 ಅಡಿ ಉದ್ದಗಲದ ಕೊಣೆಯಲ್ಲಿ ಬಂಧಿಸಿಟ್ಟಾಗ 123 ಜನ ಉಸಿರುಗಟ್ಟಿ ಸತ್ತು ಕೇವಲ 23 ಜನ ಮಾತ್ರ
ಬದುಕುಳಿದರು. ಇದೇ ಕಪ್ಪು ಕೋಣೆಯ ದುರಂತ . ಇವರಿಂದ ಧೃತಿಗೆಟ್ಟ ಬ್ರಿಟಿಷರು ಅಡ್ಮಿರಲ್‌ ವ್ಯಾಟ್ಸನ್‌ ಮತ್ತು ರಾಬಟ೯ ಕ್ಲೈವ್ ನ  ನೇತೃತ್ವದ ಸೇನೆ ಕಳುಹಿಸಿ ಮರಳಿ ಕಾಸಿಂಬಜಾರ್‌ 
ವಶಪಡಿಸಿಕೊಂಡರು ಆಗ ನವಾಬ ಮತ್ತು ಬ್ರಿಟಿಷರ ಮಧ್ಯ ಒಪ್ಪಂದವಾಯಿತು. ಅದೇ ಅಲಿನಗರ ಒಪ್ಪಂದ ಅಥವಾ ಕಾಸಿಂಬಜಾರ ಒಪ್ಪಂದ.


ಪ್ರಶ್ನೆ 7. ಒಪ್ಪಂದದ ಕರಾರುಗಳು  ಯಾವುವು


1.ಬ್ರಿಟಿಷರಿಗೆ ಹಿಂದೆ ಇದ್ದ ವ್ಯಾಪಾರಿ ಸವಲತ್ತುಗಳನ್ನು ನೀಡುವುದು.

2. ಕೋಟೆ ಕಟ್ಟುವುದಕ್ಕೆ ಅನುಮತಿ ನೀಡುವುದು

3.ಯುದ್ದ ವೆಚ್ಚವನ್ನು ನವಾಬನೇ ತುಂಬಿಕೊಡುವದು


ಪ್ರಶ್ನೆ 8.  ರಾಜಕೀಯ ಒಳಸಂಚು  ಬಗ್ಗೆ ತಿಳಿಸಿ 


ಅಲಿನಗರ ಒಪ್ಪಂದದ ನಂತರ ಬ್ರಿಟಿಷರು ಒಳಸಂಚು ನಡೆಸಿದರು. ಸಿರಾಜ್‌ ಉದ್-‌ ದೌಲ್ ನಿಂದ ಅತೃಪ್ತರಾದ

1. ಮೀರ್‌ ಜಾಫರ್‌ (ನವಾಬನ ಸೇನೆಯ ಮುಕಯಸ್ಥ)

2. ರಾಯ್ದುಲಾ೯ಭ (ಖಜಾನೆಯ ಅಧಿಕಾರಿ)

3. ಜಗತ್‌ ಸೇಠ್‌ ( ಪ್ರಮುಖ ಬ್ಯಾಂಕರ್)‌
ಅಲ್ಲದೇ ಗಸ್ತಿಬೇಗಂ ಶೌಕತ್‌ ಜಂಗ್‌, ರಾಜವಲ್ಲಭರನ್ನೋಳಗೊಂಡ ಒಂದು ಗುಂಪು ಸಿದ್ದವಾಯಿತು. ಈ ಗುಂಪಿನ ನಾಯಕನಾದ ಮೀರ್‌ ಜಾಫರ್ನೊಂದಿಗೆ
ಬ್ರಿಟಿಷರು ಒಳ ಒಪ್ಪಂದ ಮಾಡಿಕೊಂಡರು


ಪ್ರಶ್ನೆ 9.   ಒಪ್ಪಂದದ ಕರಾರುಗಳು ಯಾವುವು


1. ಸಿರಾಜ್‌ - ಉದ್-‌ ದೌಲ್‌ ನೊಂದಿಗೆ ಮಾಡುವ ಯುದ್ದದಲ್ಲಿ ಇವರು ತಟಸ್ಥವಾಗಿರುವುದು.

2. ಯುದ್ದದಲ್ಲಿ ಗೆದ್ದರೆ ಮೀರ್ ಜಾಫರ್ನನನ್ನು ಬಂಗಾಳದ ನವಾಬನನ್ನಾಗಿಸುವುದು.

3. ಯುದ್ದ ವೆಚ್ಚವನ್ನು ಮೀರ್ ಜಾಫರನೇ ತುಂಬಿಕೊಡುವುದು.



Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions