Lecture 19 ಕನ್ನಡ ಮಾಧ್ಯಮ 1 ನೇ ಚಂದ್ರಗುಪ್ತ
ಪ್ರಶ್ನೆ 1. 1 ನೇ ಚಂದ್ರಗುಪ್ತ ಕ್ರಿ.ಪೂ 320-335 ಬಗ್ಗೆ ತಿಳಿಸಿ
2. ಗುಪ್ತರ ಇತಿಹಾಸ ಇವನ ಕಾಲದಿಂದಲೇ ಪ್ರಾರಂಭವಾಗುತ್ತದೆ. ಅದಕ್ಕಾಗಿ ಇವನನ್ನು ನಿಜವಾದ ಸ್ಥಾಪಕನೆಂದು ಕರೆಯುತ್ತಾರೆ.
3. ಕ್ರಿ.ಪೂ 320 ರಲ್ಲಿ ಗುಪ್ತ ಶಕೆಯನ್ನು ಆರಂಭಿಸಿದನು. ಇದೇ ಮುಂದೆ ವಲ್ಲಭಿ ಶಕೆಯಾಗಿ ಮುಂದುವರೆಯುತು.
4. ವೈವಾಹಿಕ ಸಂಬಂಧಗಳ ಮೂಲಕ ಸಾಮ್ರಾಜ್ಯವನ್ನು ವಿಸ್ತರಿಸಿದನು.
5. ಲಿಚ್ಛವಿ ಮನೆತನದ ರಾಜಕುಮಾರಿ ಕುಮಾರಿದೇವಿಯನ್ನು ವಿವಾಹವಾಗಿದ್ದನು.
6. ತನ್ನ ಕಾಲದ ನಾಣ್ಯಗಳ ಮೆಲೆ ತನ್ನ ರಾಣಿ ಕುಮಾರಿದೇವಿಯ ಹೆಸರನ್ನು ಮಹಾದೇವಿ ಎಂದು ಮುದ್ರಿಸಿದನು.
7. ಈತನಿಗೆ ರಾಜಾಧಿರಾಜ ಎಂಬ ಬಿರುದಿತ್ತು.
ಪ್ರಶ್ನೆ 2. ಸಮುದ್ರಗುಪ್ತ ಕ್ರಿ .ಶ. 335-380 ಬಗ್ಗೆ ತಿಳಿಸಿ
. ಭಾರತದ ಇತಿಹಾಸದಲ್ಲಿಯೇ ಅಗ್ರಗಣ್ಯ ಅರಸ.
2. ಈತನ ಸಾಧನೆಯನ್ನು ತಿಳಿಸುವ ಶಾಸನ. ಅಲಹಾಬಾದ ಸ್ಥಂಭ ಶಾಸನ. ಇದರ ರಚನಾಕಾರ ಹರಿಸೇನ. ಇದು 33 ಸಾಲುಗಳನ್ನು ಒಳಗೊಂಡಿದ್ದು ಒಂದೇ ವಾಕ್ಯದಲ್ಲಿದೆ.
ಇದರಲ್ಲಿ ಸಮುದ್ರಗುಪ್ತ ಉತ್ತರದ - 9, ದಕ್ಷಿಣ - 10 ಅಡವಿ ರಾಜ್ಯಗಳು, ಪೂವ೯ ಮತ್ತು ಪಶ್ಚಿಮದ 18 ಅರಸರನ್ನು ಸೋಲಿಸಿ ಯಶಸ್ವಿಯಾಗಿ ಅಶ್ವಮೇಧಯಾಗವನ್ನು ಆಚರಿಸಿದ್ದಕ್ಕಾಗಿ ಇವನನ್ನು ವಿ.ಎ. ಸ್ಮಿತ ಭಾರತದ ನೆಪೋಲಿಯನ್ ಎಂದು ಕರೆದಿದ್ದಾರೆ.
3.ಈತನ ಮೂಲ ಹೆಸರು - ಕಚ
4.ಈತ ಸಮುದ್ರ ಯಾನದ ಮೂಲಕ ಮೊಟ್ಟಮೊದಲಬಾರಿಗೆ ವಿದೇಶದ ಮೇಲೆ ದಾಳಿ ಮಾಡಿ ಇಂಡೋನೇಷಿಯಾದ ಜಾವಾ ಮತ್ತು ಸಮಾತ್ರಾ ಎಂಬ ಪ್ರದೇಶಗಳನ್ನು ತನ್ನ ಆಡಳಿತಕ್ಕೆ ಸೇರಿಸಿಕೊಂಡಿದ್ದಾಕ್ಕಾಗಿ ಇವನನ್ನು ಸಮುದ್ರಗುಪ್ತ ಎಂದು ಕರೆಯಲಾಯಿತು
4. ಈತ ಶ್ರೀಲಂಕಾದ ಮೇಲೆ ದಾಳಿ ಮಾಡಿ ಮೇಘ ವಮ೯ನನ್ನು ಸೋಲಿಸಿ ಶ್ರೀಲಂಕಾದ ಕಪ್ಪ ಕಾಣಿಕೆ ವಸೂಲಿ ಮಾಡಿದನು.
5.ಈತನ ಸಾಮ್ರಾಜ್ಯವು ಪೂವ೯ದ ಬಂಗಾಳದಿಂದ ಪಶ್ಚಿಮದ ಸಿಂಧವರೆಗೆ ಉತ್ತರದ ಹಿಮಾಲಯದಿಂದ ದಕ್ಷಿಣದ ವಿಂದ್ಯ ಪವ೯ತದವರೆಗೆ ಹರಡಿಕೊಂಡಿತ್ತು
6.ಈತ ಕೇವಲ ಯುದ್ದ ಪ್ರಿಯನಾಗಿರದೇ ಕಲೆ ಸಾಹಿತ್ಯ ಮತ್ತು ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದನು.
7.ಈತನ ಪ್ರಸಿದ್ದ ಕೃತಿ - ಕೃಷ್ಣಚರಿತೆ
8. ಈತನಿಗಿದ್ದ ಪ್ರಸಿದ್ದ ಬಿರುದು- ಕವಿರಾಜ
9. ಈತ ತನ್ನ ಆಡಳಿತದಲ್ಲಿ 8 ಪ್ರಕಾರದ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದನು ಅವುಗಳೆಂದರೆ
ಛತ್ರ, ಕಚ್ಚ, ವೀಣಾ, ಅಶ್ವಮೇಧ, ಗಧೆ, ಪದ್ಮ, ಚಕ್ರ, ಶಂಖ
10 ಸಮುದ್ರಗುಪ್ತ ಒಬ್ಬ ಪ್ರಸಿದ್ದ ಸಂಗೀತಗಾರನಾಗಿದ್ದನೆನ್ನಲು ತನ್ನ ಕಾಲದ ನಾಣ್ಯಗಳ ಮೇಲೆ ವೀಣೆ ,ಮತ್ತು ಕೊಳಲನ್ನು ನುಡಿಸುತ್ತಿರುವ ಚಿತ್ರಗಳನ್ನು ಮುದ್ರಿಸಿದನು.
11. ಈತನ ಕಾಲದಲ್ಲಿ ಹಿಂದೂ ಧಮ೯ ಉನ್ನತ ಸ್ಥಾನದಲ್ಲಿತ್ತು.
ಪ್ರಶ್ನೆ 3. ರಾಮ ಗುಪ್ತ ಕ್ರಿ.ಶ. 380 ಬಗ್ಗೆ ತಿಳಿಸಿ
1. ಸಮುದ್ರ ಗುಪ್ತನ ಹಿರಿಯ ಮಗನಾಗಿದ್ದಾನೆ.
2. ಈತನ ಕಾಲದಲ್ಲಿ ಶಕರ ಕೊನೆಯ ದೊರೆ 3 ನೇ ರುದ್ರಸಿಂಹನು ಪಟಲಿ ಪುತ್ರದ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದನು. ಅವನ ದಾಳಿಯನ್ನು ತಡೆಯಲಾಗದೆ ತನ್ನಹೆಂಡತಿ ದೃವಲಾದೇವಿಯನ್ನು ಬಿಟ್ಟು ಕೊಡಲು ಒಪ್ಪಿದನು.
ಆಗ ಸಮುದ್ರಗುಪ್ತನ ಇನ್ನೊಬ್ಬ ಮಗ 2 ನೇ ಚಂದ್ರಗುಪ್ತನು ಅಧಿಕಾರಕ್ಕೆ ಬಂದನು